ಬಸವಣ್ಣ   
  ವಚನ - 542     
 
ಒಬ್ಬ ಕೆಂಚನೊಬ್ಬ ಕರಿಕನೊಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೇ? ಒಬ್ಬರಿಗೊಬ್ಬರು ಘನವೆಂಬರು: ಅದೆಂತಯ್ಯಾ? ಒಬ್ಬರಿಗೊಬ್ಬರು ಹಿರಿದೆಂಬರು; ಎಂತಯ್ಯಾ? ಬ್ರಹ್ಮಪ್ರಳಯ, ವಿಷ್ಣು ಮರಣ ಉಂಟು. ನಮ್ಮ ಕೂಡಲಸಂಗಂಗಿಲ್ಲ!