ಬಸವಣ್ಣ   
  ವಚನ - 548     
 
ಕೇಶವನಲ್ಲದೆ ಅತಃಪರದೈವವಿಲ್ಲೆಂದು ವೇದವ್ಯಾಸಮುನಿ ಭಂಗವಾದುದನರಿಯಿರೆ? "ಅಹಮೇವ ಜಗತ್ ಕರ್ತಾ| ಮಮ ಕರ್ತಾ ಮಹೇಶ್ವರಃ" ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ! ಕೂಡಲಸಂಗಮದೇವನು ದಕ್ಷ ಯಜ್ಞವ ಕೆಡಿಸಿದುದ ಮರೆದಿರಲ್ಲಾ!!