ಬಸವಣ್ಣ   
  ವಚನ - 550     
 
ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ, ದೇವರೆಂಬವರೆತ್ತ ಹೋದರೇನಿಂ ಭೋ! ಅಂದೊಮ್ಮೆ ಓಡಿಹೋಗಿ ಆತನ ಮೊರೆಯ ಹೋಗುವಂದು ದೇವರೆಂಬವರೆತ್ತ ಹೋದರೇನಿಂ ಭೋ? ಕೂಡಲಸಂಗಯ್ಯ ದೇವರಿಗೆ ದೇವನು: ನೀವೆಲ್ಲಾ ಆಳೆಂಬುದನರಿಯಿಂ ಭೋ!