ಬಸವಣ್ಣ   
  ವಚನ - 551     
 
ವಿಷ್ಣು ಬಲ್ಲಿದನೆಂಬೆನೆ? ದಶಾವತಾರದಲ್ಲಿ ಭಂಗವಟ್ಟುದಕ್ಕೆ ಕಡೆಯಿಲ್ಲ! ಬ್ರಹ್ಮ ಬಲ್ಲಿದನೆಂಬೆನೆ? ಶಿರ ಹೋಗಿ ನಾನಾ ವಿಧಿಯಾದ! ವೇದ ಬಲ್ಲಿತ್ತೆಂಬೆನೆ? ನಾನಾ ಮುಖದಲ್ಲಿ ಸ್ತುತಿಯಿಸಿತ್ತಲ್ಲದೆ ಲಿಂಗದ ನಿಲುಗಡೆಯ ಕಾಣದು! ಶಾಸ್ತ್ರ ಬಲ್ಲಿತ್ತೆಂಬೆನೆ? ಶಬ್ದಕ್ರಿ! ಪುರಾಣ ಬಲ್ಲಿತ್ತೆಂಬೆನೆ? ಪೂರ್ವಕ್ರಿ! ಆಗಮ ಬಲ್ಲಿತ್ತೆಂಬೆನೆ? ವಾಯ ಹೊಂದಿತ್ತು! ಇದು ಕಾರಣ, ಕೂಡಲಸಂಗಯ್ಯನೇ ನಿತ್ಯ! ಉಳಿದ ದೈವವೆಲ್ಲ ಅನಿತ್ಯ ಕಾಣಿ, ಭೋ!