ಬಸವಣ್ಣ   
  ವಚನ - 555     
 
ಗಾಡಿಗ ಡಿಂಗು ಗಂಗೆ ಚಿಕ್ಕು ಮುಟ್ಟಿಗೆ, ಹಸು ರಂಬಲಿ ಮುಟ್ಟಿಗೆ ಹುರಿಬುತ್ತಿಯ ಬೇಡಿ, ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ, ಈಡಾಡಿದ ಕೂಳಂಬಲಿಯನಾಯ್ದು ಕುರುಕುವ ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ, ಕೂಡಲಸಂಗಮದೇವರ ನೆರೆ ನಂಬುವುದೆಲವೋ!