ಬಸವಣ್ಣ   
  ವಚನ - 577     
 
ಇಟ್ಟೆಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತೆಂಬಂತೆ ಮಟ್ಟಿಯನಿಟ್ಟ ದ್ವಿಜರ ಮಾತದೇಕೆ? ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ, ಜಗಕ್ಕೆ ಇರುಳಪ್ಪುದೆ, ಮರುಳೆ|| ಹೋಮದ ನೆವದಲ್ಲಿ ಹೋತನ ತಿಂಬ ಅನಾಮಿಕರೊಡನಾಡಿ ಗೆಲುವುದೇನು ಕೂಡಲಸಂಗಮದೇವಾ?