ಬಸವಣ್ಣ   
  ವಚನ - 579     
 
ಮಾಣದೆ ಅರಳೆಯ ತಿಟ್ಟನೆ ತಿರುಗುವ ಗಾಣದೆತ್ತಿನಂತೆ, ಪೂರ್ವಲಿಖಿತ ಮುಂದುಗಾಣಲೀಯದು. ನೀವೆಲ್ಲಾ ವಾಯಕ್ಕೆ ಕೆಡಬೇಡ: ಮಾಣದೆ ಪೂಜಿಸು ಲಿಂಗವ. ಹೆರರ ಗೋಣ ಕೊಯ್ದೆನೆಂದು ಮಂತ್ರವನೋದುವ ನೇಣುಗಾರರ ಮೆಚ್ಚ ಕೂಡಲಸಂಗಮದೇವ.