ಬಸವಣ್ಣ   
  ವಚನ - 584     
 
ನರಜನ್ಮದಲ್ಲಿ ಹುಟ್ಟಿ ಲಿಂಗಮುಖವನರಿಯದೆ ಉದಮದ ಸೊಕ್ಕಿ ತಲೆಗೇರಿತ್ತೆ, ಅಯ್ಯಾ! `ಜೀವೋ ಜೀವೇನ ಭಕ್ಷ್ಯತೇ', ಕರ್ಮಕರ್ಮದಲಿಪ್ಪೆಯಯ್ಯಾ! ಅಂದೊಮ್ಮೆ ದಕ್ಷನು ಹೋತನ ಕೊಂದಲ್ಲಿ- ಘೋಳಿಡಲಿ ಘೋಳಿಡಲಿಕೆ ತಂದಿಕ್ಕೆ ಅಕ್ಕಿತ್ತೆ! ನಿಮ್ಮ ವೇದಶಾಸ್ತ್ರಂಗಳು ಮೂರುತಿಗೊಂಡಲ್ಲಿ ಚತುರ್ವೇದಿಗಳಿಗೊಮ್ಮೆ ಅಕ್ಕಿತ್ತೆ ಅಯ್ಯಾ ನಮ್ಮ ಕೂಡಲಸಂಗನನರಿಯದ ಕಾರಣ ನಾಯಕನರಕದಲ್ಲಿಕ್ಕಿತ್ತೆ ಅಯ್ಯಾ!