ಬಸವಣ್ಣ   
  ವಚನ - 595     
 
ಜಾತಿವಿಡಿದು ಸೂತಕವನರಸುವೆ: ಜ್ಯೋತಿವಿಡಿದು ಕತ್ತಲೆಯನರಸುವೆ! ಇದೇಕೊ ಮರುಳ ಮಾನವಾ? ಜಾತಿಯಲ್ಲಿ ಅಧಿಕನೆಂಬೆ: ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನು? `ಭಕ್ತ ಶಿಖಾಮಣಿ' ಎಂದುದು ವಚನ. ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು, ಕೆಡಬೇಡಾ ಮಾನವಾ.