ಬಸವಣ್ಣ   
  ವಚನ - 600     
 
ನೀವು ಹಿರಿಯರೆಂಬಿರಿ, ಕರ್ಮಿಗಳು ನೀವು ಕೇಳಿರಿ; ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು? `ಓಂ ದ್ಯಾವಾ ಭೂಮೀ ಜನಯಂ ದೇವ ಏಕೋ ದೇವʼ ಎಂದು ಶ್ರುತಿ ಸ್ಮೃತಿಗಳು ಸಾರುತ್ತಲಿದ್ದಾವು. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬುದು ಹುಸಿ: `ವರ್ಣಾನಾಂ ಗುರು' ನಮ್ಮ ಕೂಡಲಸಂಗನ ಶರಣರು.