ಬಸವಣ್ಣ   
  ವಚನ - 608     
 
ಬಂದು ಬಲ್ಲಹ ಬಿಡಲು ಹೊಲೆಗೇರಿ ಎಂಬ ಹೆಸರೊಳವೆ? ಅಯ್ಯಾ! ಲಿಂಗವಿದ್ದವರ ಮನೆ ಕೈಲಾಸವೆಂದು ನಂಬಬೇಕು, ಇದಕ್ಕೆ ಪ್ರಮಾಣ: 'ಚಾಂಡಾಲವಾಟಿಕಾಯಾಂ ವಾ| ಶಿವಭಕ್ತಃ ಸ್ಥಿತೋ ಯದಿ ತ‌ಚ್ಛ್ರೆಣಿಃ ಶಿವಲೋಕಸ್ಯಾತ್ ತದ್ ಗೃಹಂ ಶಿವಮಂದಿರಂ' ಲೋಕದ ಡಂಭಕರ ಮಾತು ಬೇಡಾ, ಕೂಡಲಸಂಗಮನಿದ್ದುದೇ ಕೈಲಾಸ.