ಬಸವಣ್ಣ   
  ವಚನ - 611     
 
ಅಶ್ವಮೇಧಯಾಗವಂತಿರಲಿ. ಅಜಪ ಉಪದೇಶ ಸಮಾಧಿಯಂತಿರಲಿ, ಹೋ! ಹೋಮ-ನೇಮ-ಗಾಯತ್ರಿಯ ಜಪವಂತಿರಲಿ, ಹೋ! ಜನಮೋಹನ ಮಂತ್ರವಂತಿರಲಿ, ಹೋ! ಕೂಡಲಸಂಗನ ಶರಣರ ನುಡಿಗಡಣೆ ಎಲ್ಲಕ್ಕೂ ಅಧಿಕ ನೋಡಾ!