ಬಸವಣ್ಣ   
  ವಚನ - 613     
 
ಹಾರುವರೆಲ್ಲರೂ ನೆರೆದು ಶೂದ್ರನ ಹಾರುವನ ಮಾಡುವಲ್ಲಿ ನಂದಿಮುಖವಲ್ಲದೆ ಮಾಡಲಾಗದು; ವಿಭೂತಿಯಲ್ಲದೆ ಮತ್ತೇನನೂ ಮಾಡಲಾಗದು; `ಭರ್ಗೋ ದೇವ' ಎಂಬ ಮಂತ್ರವಲ್ಲದೆ ಮತ್ತೇನನೂ ಮಾಡಲಾಗದು. ನಿಮ್ಮಿಂದ ಕುಲಜರಾಗಿ ಮತ್ತೆ ಅನ್ಯದೈವಕ್ಕೆರಗುವ ಜಗದನ್ಯಾಯಿಗಳಳೇನೆಂಬೆ, ಕೂಡಲಸಂಗಮದೇವಾ?