ಬಸವಣ್ಣ   
  ವಚನ - 623     
 
ಎಚ್ಚು ವಾಲಿಯ ಕೊಂದ, ಕಟ್ಟಿದನು ಶರಧಿಯನು; ಹತ್ತು ತಲೆಯ ರಾವಣನ ಒಂದೆ ಅಂಬಿನಲಿ ಮಡುಹಿದ; ಛಲದಿಂದ ಲಂಕಾದ್ವೀಪವ ನೆಲವಣ್ಣವ ಮಾಡಿದ, ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ: ರಾಮನ ತೋರೌ! ಮಾಯದ ಸಂಸಾರವ ನಚ್ಚಿ, ವಾಯಕ್ಕೆ ಕೆಟ್ಟು ಬರುದೊರೆವೊಗಬೇಡ, ಕರ್ತು ಕೂಡಲಸಂಗಯ್ಯಂಗೆ ಶರಣೆನ್ನಿರಯ್ಯಾ!