ಬಸವಣ್ಣ   
  ವಚನ - 628     
 
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು: ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರಸುವರು. ಎಂತಯ್ಯಾ ಅವರ ಭಕ್ತರೆಂಬೆ? ಎಂತಯ್ಯಾ, ಅವರ ಯುಕ್ತರೆಂಬೆ? ಕೂಡಲಸಂಗಮದೇವಾ, ಕೇಳಯ್ಯಾ, ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ!