ಬಸವಣ್ಣ   
  ವಚನ - 634     
 
ಮುನ್ನಿನ ಆದ್ಯರ ಪಂಥಗಳು ಇನ್ನಾರಿಗೆಯೂ ಅಳವಡದು, ನೋಡಾ! ಬಲ್ಲೆನಾಗಿ ಒಲ್ಲೆನು- ಅವರು ಸಲ್ಲರು ಶಿವಪಥಕ್ಕೆ, ಒಳ್ಳಿಹ ಮೈಲಾರನ ಸಿಂಗಾರದಂತೆ, ವೇಶಿಯ ಬಾಯಂಜಲ ತಿಂಬ ದಾಸಿಯ ಸಂಸಾರದಂತೆ- ಕೂಡಲಸಂಗನ ಶರಣರನರಿಯದ ಉಳಿದ ಭಂಗಿತರ!