ಬಸವಣ್ಣ   
  ವಚನ - 647     
 
ತನು ಶುಚಿಯಿಲ್ಲದವನ ದೇಹಾರವೇಕೆ? ದೇವರು ಕೊಡನೆಂಬ ಭ್ರಾಂತದೇಕೆ? ಮನಕ್ಕೆ ಮನವೆ ಸಾಕ್ಷಿ; ಸಾಲದೆ, ಲಿಂಗತಂದೆ? ಹೇಂಗೆ ಮನ ಹಾಂಗೆ ನಿಮ್ಮ ಘನ, ತಪ್ಪದು, ಕೂಡಲಸಂಗಮದೇವ.