ಬಸವಣ್ಣ   
  ವಚನ - 648     
 
ಶರಣರ ನಿಚ್ಚನಿಚ್ಚ ಪೂಜಿಸುವಂಗೆ: ಇದಕ್ಕಿದೆ ದೃಷ್ಟ ದೀವಿಗೆ- ಪಾದೋದಕ ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ. ಮಜ್ಜನಕ್ಕೆರೆವುದು ಲಿಂಗ: ಅದು ಲಿಂಗ ಕರಸ್ಥಲದ ದಿಬ್ಯ- ಗುರುವಚನ ಭಾಷಾಪತ್ರ ಶಿವಕರದಲ್ಲಿ! ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ, ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ! ಲಿಂಗವ ಪೂಜಿಸಿ ಮರಳಿ ಅನ್ಯಕ್ಕೆರಗಿದಡೆ ಕೂಡಲಸಂಗಮದೇವನವರ ಹಲ್ಲ ಕಳೆವ!