ಬಸವಣ್ಣ   
  ವಚನ - 650     
 
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ! ಪಾಪಿ ಹೂವನೇರಿಸಲು ಮಸೆದಡಾಯುಧದ ಗಾಯ! ಕೂರ್ಪವರನಾರನೂ ಕಾಣೆನು ಮಾದಾರ ಚೆನ್ನಯ್ಯನನಲ್ಲದೆ; ಕೂರ್ಪವರನಾರನೂ ಕಾಣೆನು ಡೋಹಾರ ಕಕ್ಕಯ್ಯನಲ್ಲದೆ. (ವ್ಯಾಪತ್ತಿ)ಯುಳ್ಳ ನಮ್ಮ ಮಡಿವಾಳ ಮಾಚಯ್ಯ ನಿನ್ನಾಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ!