ಬಸವಣ್ಣ   
  ವಚನ - 652     
 
ನೂರನೋದಿ ನೂರ ಕೇಳಿದರೇನು? ಆಸೆ ಹರಿಯದು, ರೋಷ ಬಿಡದು, ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ, ನಗುವ ನಮ್ಮ ಕೂಡಲಸಂಗಮದೇವ.