ಬಸವಣ್ಣ   
  ವಚನ - 657     
 
ಶ್ವಪಚನಾದರೇನು? ಲಿಂಗಭಕ್ತನೇ ಕುಲಜನು. ನಂಬಿ ನಂಬದಿದ್ದರೆ ಸಂದೇಹಿ, ನೋಡಾ! ಕಟ್ಟಿದರೇನು, ಮುಟ್ಟಿದರೇನು, ಹೂಸಿದರೇನು ಮನಮುಟ್ಟದನ್ನಕ್ಕ? ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು, ಕೂಡಲಸಂಗಯ್ಯ ನೊಲಿದಂಗಲ್ಲದೆ.