ಬಸವಣ್ಣ   
  ವಚನ - 659     
 
ನಿಧಾನವನರಸಿಹೆವೆಂದು ಹೋದರೆ, ವಿಘ್ನ ಬಪ್ಪುದು ಮಾಣ್ಬುದೆ? ಸದಾಶಿವನೆಂದರೆ, ಬೆದರಟ್ಟಿ ಸುಡುವುದು ಮಾಣ್ಬುದೆ? ಹದುಳಿಗನಾಗಿ ಉಳಿದರೆ ಪದವಿಯನೀವ, ಕಾಣಾ, ಕೂಡಲಸಂಗಮದೇವ.