ಬಸವಣ್ಣ   
  ವಚನ - 663     
 
ಉರಿವ ಕೊಳ್ಳಿಯ ಮಂಡೆಯಲಿಕ್ಕಿದೊಡುರಿವುದು ಮಾಣ್ಬುದೆ? ಕಲ್ಲ ಗುಗ್ಗರಿಯ ಮೆಲಿದರೆ ಹಲ್ಲು ಹೋಹುದು ಮಾಣ್ಬುದೆ? ಶರಣರೊಡನೆ ಸರಸವಾಡಿದರೆ ನರಕ ತಪ್ಪದು, ಕಾಣಾ, ಕೂಡಲಸಂಗಮದೇವಾ!