ಬಸವಣ್ಣ   
  ವಚನ - 668     
 
ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು. ನುಡಿದ ನುಡಿ ಜಾರಿದರೆ ಮನಕ್ಕೆ ಮನ ನಾಚಬೇಕು: ಶಬ್ದ ಘಟ್ಟಿಯತನದಲ್ಲಿ ಎಂತಪ್ಪುದಯ್ಯಾ ಭಕ್ತಿ? ಪಾಪಿಯ ಕೂಸನೆತ್ತಿದಂತೆ. ಕೂಡಲಸಂಗಮದೇವರ ಭಕ್ತಿ ಅಳಿಮನದವರಿಗೆ ಅಳವಡದಯ್ಯಾ.