ಬಸವಣ್ಣ   
  ವಚನ - 669     
 
ಹರಬೀಜವಾದರೆ ಹಂದೆ ತಾನಪ್ಪನೆ? ಒರೆಗಟ್ಟಿ ಇರಿಯದವರ ಲೋಕ ಮೆಚ್ಚುವುದೆ? ಉಟ್ಟ ಚಲ್ಲಣ ಕೈಯ ಪಟ್ಟೆಯವಿಡಿದು, ಗರುಡಿಯ ಕಟ್ಟಿ ಶ್ರವವ ಮಾಡುವಂತೆ ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ? ಅರಿಯದವರಿಗೆ ಒಳ್ಳೆ ಹೆಡೆಯನೆತ್ತಿಯಾಡುವಂತೆ ಬೊಳ್ಳಗನ ಭಕ್ತಿ ಕೂಡಲಸಂಗಮದೇವಾ.