ಬಸವಣ್ಣ   
  ವಚನ - 670     
 
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು? ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು? ಭಾಷೆ ತಪ್ಪಿದ ಬಳಿಕ ದೇವ ಬಲ್ಲಿದ! ಭಕ್ತನೇನ ಮಾಡುವನಯ್ಯಾ? ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದರೆ ಮೀಸಲ ಸೊಣಗ ಮುಟ್ಟಿದಂತೆ, ಕೂಡಲಸಂಗಮದೇವಾ!