ಬಸವಣ್ಣ   
  ವಚನ - 671     
 
ಶರಣ ಸಂಬಂಧವನರಿದ ಬಳಿಕ ಮರಳಿ ಭವಿಯ ಬೆರಸಬಾರದು: ಬ್ರಹ್ಮಹತ್ಯ, ಭ್ರೂಣಹತ್ಯ, ವೈತರಣಿ, ದುರ್ಗತಿ ಪಂಚಮಹಾಪಾತಕದಿಂದಧಿಕ. ನೋಡಾ.! ಅಳುಪಿ ಭವಿಯೊಡನುಂಡರೆ ಭಕ್ತನಲ್ಲಾ, ಕೂಡಲಸಂಗಮದೇವಾ.