ಬಸವಣ್ಣ   
  ವಚನ - 673     
 
ಕಲಿತನ ತನಗುಳ್ಳರೆ ಸೂಜಿ-ಬಾಳು ಮೊದಲಾಗಿ ಕಾದಲೇಬೇಕು. ಶರಣಪಥ ತನಗುಳ್ಳರೆ ಶಿವಭಕ್ತರ ಮನೆಯಲ್ಲಿ ಶಿವರಸವ ಪಂಚಾಮೃತವ ಮಾಡಿಕೊಳ್ಳಬೇಕು. ಭ್ರಾಂತುವಿಡಿದು ಲಿಂಗಕ್ಕೋಗರವನರಸುವ ಪಾತಕರ ಮೆಚ್ಚ ಕೂಡಲಸಂಗಮದೇವಾ.