ಬಸವಣ್ಣ   
  ವಚನ - 675     
 
ಹುಟ್ಟುವಲ್ಲಿ ಭವಿ, ಮರಳಿ ಭಕ್ತನ ಮಾಡಿ, ಪೂರ್ವಾಶ್ರಮವ ಕಳೆದು, ಹೊಂದುವಲ್ಲಿ ಭವಿಯಾಗಿ ಹೋಹರೆ ಮುಟ್ಟಲಾಗದು. ಅವನ ಮುಟ್ಟಿದವ ಮುನ್ನವೆ ವ್ರತಗೇಡಿ, ಅವನ ಶ್ರಾದ್ಧಕಾಲವೆ ಶ್ವಾನಮಾಂಸ, ಕ್ರಿಯಾಕಾಲವೆ ಕ್ರಿಮಿಗಳು; ತದ್ದಿನವೆ ಮದ್ಯಮಾಂಸ! ಇದು ಕಾರಣ; ಕೂಡಲಸಂಗಮದೇವಾ, ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ!