ಬಸವಣ್ಣ   
  ವಚನ - 684     
 
ನಿಸ್ಸೀಮ ಗುಗ್ಗುಳವನಿಕ್ಕಿದವನೊಬ್ಬ ಶರಣ: 'ಉಘೇ, ಚಾಂಗು ಭಲಾ' ಎಂಬ ಹೊಗೆ ಗಗನವ ತೀವೆ. ಓಹಿಲನ ಮೆರೆದ ಸೌರಾಷ್ಟ್ರವೆಂಬ ಮಂಡಲದಲ್ಲಿ, ಕೂಡಲಸಂಗಮದೇವ ಭಕ್ತವತ್ಸಲನಾಗಿ.