ಬಸವಣ್ಣ   
  ವಚನ - 688     
 
ಅಂಜಿದರಾಗದು, ಅಳುಕಿದರಾಗದು,ವಜ್ರ ಪಂಜರದೊಳಗಿದ್ದರಾಗದು: ತಪ್ಪದುವೋ ಲಲಾಟಲಿಖಿತ! ಕಕ್ಕುಲತೆಗೆ ಬಂದರೆ ಆಗದು ನೋಡಾ! ಧೃತಿಗೆಟ್ಟು, ಮನ ಧಾತುಗೆಟ್ಟರೆ ಅಪ್ಪುದು ತಪ್ಪದು, ಕೂಡಲಸಂಗಮದೇವಾ.