ಬಸವಣ್ಣ   
  ವಚನ - 692     
 
ಎನಿಸೆನಿಸೆಂದೊಡೆ ನಾ ಧೃತಿಗೆಡೆನಯ್ಯಾ: ಎಲುದೋರಿದರೆ, ನರ ಹರಿದರೆ, ಕರುಳು ಕುಪ್ಪಳಿಸಿದರೆ ನಾ ಧೃತಿಗೆಡೆನಯ್ಯಾ. ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದರೆ ನಾಲಗೆ ʼಕೂಡಲಸಂಗಾ, ಶರಣೆʼನುತ್ತಿದ್ದೀತಯ್ಯಾ?