ಬಸವಣ್ಣ   
  ವಚನ - 698     
 
ಕಳಹೋದರೆ ಕನ್ನದುಳಿಯ ಹಿಡಿವೆ: ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ; ಮನಭೀತಿ-ಮನಶಂಕೆಗೊಂಡೆನಾದರೆ ನಿಮ್ಮಾಣೆ, ನಿಮ್ಮ ಪುರಾತನರಾಣೆ! ಆಳ್ದರ ನಡೆ ಸದಾಚಾರವೆನ್ನದಿದ್ದರೆ, ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ, ಕೂಡಲಸಂಗಮದೇವಾ.