ಬಸವಣ್ಣ   
  ವಚನ - 701     
 
ಕಟ್ಟಿದೆ ಒರೆಯ, ಬಿಟ್ಟೆ ಜನ್ನಿಗೆಯ, ಮುಟ್ಟಿ ಬಂದಿರಿದರೆ ಓಸರಿಸುವನಲ್ಲ: ಓಡದಿರು, ಓಡದಿರು!- ನಿಮ್ಮ ಶರಣರ ಮನೆಯ ಬಿದುರಿನ ಅಂಕಕಾರ- ಓಡದಿರು, ಓಡದಿರು, ಎಲೆ ಎಲೆ ದೇವಾ, ಎಲೆ ಎಲೆ ಸ್ವಾಮೀ, ಎಲೆ ಎಲೆ ಹಂದೇ! ಕೂಡಲಸಂಗಮದೇವಾ!