ಬಸವಣ್ಣ   
  ವಚನ - 706     
 
ಹುಟ್ಟುತ ದ್ರವ್ಯವನರಿಯದವಂಗೆ ಐಶ್ವರ್ಯವಂತ ಮಗನಾದರೆ ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷ ಪಡಿಸುವಂತೆ, ಕಾಳಗದ ಮುಖವಾವುದೆಂದರಿಯದ ಹಂದೆ ನೃಪಂಗೆ ಒಬ್ಬ ಕ್ಷತ್ರಿಯ ಕುಮಾರ ಹುಟ್ಟಿ, ಕಿಗ್ಗಡಲ ರಕ್ತದ ಹೊನಲಲಿ ಕಡಿದು ಮುಳುಗಾಡುವ ಕೊಳಗುಳವ ಕಂಡು ಪರಿಣಾಮಿಸುವಂತೆ, ಆನು ಪರಿಣಾಮಿಸುವೆನಯ್ಯಾ, ಕೂಡಲಸಂಗಮದೇವಾ, ನೀವು ಬಂದೆನ್ನ ಬೇಡಿದರೆ!