ಬಸವಣ್ಣ   
  ವಚನ - 726     
 
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು, ಶಿವಚಿತ್ತವೆಂಬ ಕೂರಲಗ ಕೊಂಡು, ಶರಣಾರ್ಥಿಯೆಂಬ ಶ್ರವವ ಕಲಿತರೆ, ಆಳುತನಕ್ಕೆ ದೇಸಿಯಪ್ಪೆ , ನೋಡಾ. ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆದ್ದು ನಡೆವುದು; ಕೂಡಲಸಂಗಮದೇವನನೊಲಿಸುವೊಡಿದು ಚಿಹ್ನ!