ಬಸವಣ್ಣ   
  ವಚನ - 731     
 
ಹಲ್ಲು ಹತ್ತಿ ನಾಲಗೆ ಹೊರಳದಿದ್ದಲ್ಲಿ ಮನವೆರಡಾದರೆ ಆಣೆ, ನಿಮ್ಮಾಣೆ! ಮಾಡುವ ನೇಮಕ್ಕೆ ಛಲವಿಲ್ಲದಿದ್ದರೆ ಆಣೆ, ನಿಮ್ಮಾಣೆ! ಕೂಡಲಸಂಗಮದೇವ ಎನ್ನ ಮನವ ನೋಡಲೆಂದಟ್ಟಿದರೆ ಪ್ರಸಾದವನಲ್ಲದೆ ಕೊಂಡರೆ ಆಣೆ, ನಿಮ್ಮಾಣೆ !