ಬಸವಣ್ಣ   
  ವಚನ - 743     
 
ಹರಿಯಜ ಮುನಿಗಳೆಲ್ಲರೂ ನಿಜ,ನಿಮ್ಮ ಬಾಗಿಲ ಕಾಯ್ದಿಹರು, ಏನು ಕಾರಣ ನೀವು ಬಾಣನ ಬಾಗಿಲ ಕಾಯ್ದಿರಿ? ಡಿಂಗರಿಗನ ಮನೆಗೆ ಅಂಗಜಾವಹಕ್ಕೆ ಹೋಗಿದ್ದವರೊಳರೆ ಕೂಡಲಸಂಗಮದೇವಾ?