ಬಸವಣ್ಣ   
  ವಚನ - 749     
 
ಪಂಚಬ್ರಹ್ಮವ ಕೆಡಿಸಿತ್ತು; ಪ್ರಣವಮಂತ್ರವನೀಡಾಡಿತ್ತಲ್ಲಾ; ಕರ್ಮಂಗಳನೆ ಕಳೆಯಿತ್ತು; ಕ್ರೀಗಳನೆ ಮೀರಿತ್ತಲ್ಲಾ; ಆಗಮದ ಹಲ್ಲನೆ ಕಳೆಯಿತ್ತು, ಕೂಡಲಸಂಗಯ್ಯನ ಭಕ್ತಿಗಜ ಹೋ!