Music Courtesy: Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 541
Hindi Translationवेद भर्राये, शास्त्र पार्श्व में हट गया!
तर्क, तर्क करना न जान मूक बन गया।
आगम खिसककर पृथक हो गया ।
इसलिए कि मम कूडलसंगमदेव ने।
चन्नय्या के घर में भोजन किया॥
Translated by: Banakara K Gowdappa
English Translation The Vēda quaked, the Śāstra stepped aside;
Logic, unable to infer, fell dumb;
The Āgamas, swerving, stood apart-
Because our Lord Kūḍala Saṅga
Ate at Cennayya's house!
Translated by: L M A Menezes, S M Angadi
Tamil Translationவேதம் நடுநடுங்கியது, சாத்திரம் அகன்று
பக்கத்தில் சரிந்தது, தருக்கம், தருக்கம்
செய்ய அறியாது ஊமையாயிற்றன்றோ!
ஆகமம் பின்னால் சரிந்து அகன்றது ஐயனே
நம் கூடல சங்கமதேவன், சக்கிலி
சென்னய்யனின் இல்லத்தில் உண்டதால் ஐயனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 638
ಕನ್ನಡ ವ್ಯಾಖ್ಯಾನವೈದಿಕಧರ್ಮದ ವಿಶಿಷ್ಟಲಕ್ಷಣವೆಂದರೆ ವರ್ಣವ್ಯವಸ್ಥೆ : ಸ್ವಧರ್ಮೀಯರನ್ನು ಮೇಲುಕೀಳೆಂದು -ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಪಂಚಮರೆಂದು ವಿಭಾಗಿಸುವುದು. ಮೇಲುಮೇಲಿನವರು ಕೆಳಕೆಳಗಿನವರನ್ನು ಶೋಷಿಸುವುದು. ಈ ವ್ಯವಸ್ಥೆಯನ್ನು ಅದಲುಬದಲಿಸಲಾಗದು –ಉಪೇಕ್ಷಿಸಲೂ ಆಗದು-ಈ ಪ್ರಯತ್ನದಲ್ಲಿ ತೊಡಗಿದವರು ವಧಿಸಲ್ಪಡುತ್ತಿದ್ದರು ಅಥವಾ ನಾಸ್ತಿಕರೆಂದು ಬಹಿಷ್ಕರಿಸಲ್ಪಡುತ್ತಿದ್ದರು.
ಆದ್ದರಿಂದ ಶೂದ್ರರೂ ಪಂಚಮರೂ ಮೇಲ್ವರ್ಣದವರ ದಾಸ್ಯವನ್ನು ಮಾಡಿಕೊಂಡೇ ಜೀವಿಸಬೇಕಾಗಿತ್ತು. ಈ ಅಮಾನವೀಯವನ್ನು ಜೈನ-ಬೌದ್ಧ-ಶರಣಧರ್ಮಗಳು ಪ್ರತಿಭಟಿಸಿದವು.
ಈ ಹಿನ್ನೆಲೆಯಲ್ಲಿ ಬಸವಣ್ಣನವರೂ 12ನೇ ಶತಮಾನದಷ್ಟು ಹಿಂದೆ–ಈ ವರ್ಣವ್ಯವಸ್ಥೆಯನ್ನು ಅಲ್ಲಗಳೆದು–ಕಲ್ಯಾಣೀ ಚಾಳುಕ್ಯರ ರಾಜಧಾನಿಯಾದ ಕಲ್ಯಾಣನಗರದಲ್ಲಿಯೇ ನಾಗಿದೇವನೆಂಬೊಬ್ಬ ದಲಿತ ಶಿವಭಕ್ತನ ಮನೆಯಲ್ಲಿ ಊಟಮಾಡಿ ಅರಮನೆಯನ್ನು ಪ್ರವೇಶಿಸುತ್ತಿರಲು –ಏರ್ಪಟ್ಟ ಉಗ್ರ ಪದರ್ಶನವನ್ನು ಉಗ್ರವಾಗಿಯೇ ಎದುರಿಸಿದರು : ದೇವರೇ ಮಾದರ ಚೆನ್ನಯ್ಯನ ಮನೆಯಲ್ಲಿ ಉಂಡನೆಂದು ಭಕ್ತಿಚರಿತ್ರೆಯನ್ನು ಉಲ್ಲೇಖಿಸಿದರು. ಹೀಗೆ ಬಸವಣ್ಣನವರು ಈ ವರ್ಣಸಂಕರವನ್ನು ಬೆಂಬಲಿಸುತ್ತ–ಅದನ್ನು ವಿರೋಧಿಸಿಕೊಂಡು ಬಂದಿದ್ದ ವೇದ-ಶಾಸ್ತ್ರ-ತರ್ಕ-ಆಗಮಾದಿ ಧರ್ಮಗ್ರಂಥಗಳನ್ನು ಬಲವಾಗಿ ನಿರಾಕರಿಸಿದರು.
ವರ್ಣಸಂಕರವನ್ನು ಸಹಿಸದ ಭಗವದ್ಗೀತೆಯ ಮಾತನ್ನು ನೋಡಿ :
ಚಾತುರ್ವರ್ಣ್ಯಂ ಮಾಯ ಸೃಷ್ಟಂ ಗುಣಕರ್ಮ ವಿಭಾಗಶಃ
ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಂ |
ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ |
ಪತಂತಿ ಪಿತರೋ ಹ್ಯೇಷಾಂ ಲುಪ್ತ ಪಿಂಡೋದಕಕ್ರಿಯಾಃ
ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ |
ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ
ಅನುವಾದ : ಜನರ ಗುಣ ಮತ್ತು ಕರ್ಮಕ್ಕನುಸಾರವಾಗಿ ವರ್ಣವ್ಯವಸ್ಥೆಯನ್ನು ಮಾಡಿದವನು ನಾನೇ. ಆ ವರ್ಣಧರ್ಮೋಚಿತವಾದ ಕರ್ಮಗಳನ್ನು ನಿರ್ವಿಘ್ನ ನಡೆಯುವಂತೆ ಮಾಡದಿದ್ದರೆ ಏಳು ಲೋಕ ಹಾಳಾಗುವುದು-ಮತ್ತು ವರ್ಣಸಂಕರಕ್ಕೆ ನಾನೇ ಕಾರಣಕರ್ತನೆನಿಸಿ -ನಾನೇ ಈ ಜನರನ್ನು ಕೈಯಾರೆ ಕೊಂದಂತಾಗುವುದು. ಕುಲವ್ಯವಸ್ಥೆಯನ್ನು ನಾಶಮಾಡಿದವರಿಗೇ ಅಲ್ಲ ಆ ಕುಲಸಮೂಹಕ್ಕೂ ನರಕ ಉಂಟಾಗುವುದು –ವರ್ಣಸಂಕರ ದೋಷದಿಂದ. ಇಂಥವರ ಪಿತರರೂ ಪಿಂಡೋದಕ ಕ್ರಿಯೆಗಳಿಗೆ ಅರ್ಹರಾಗದೆ ಪತಿತರಾಗುವರು. ಕುಲಘ್ನರ ಈ ವರ್ಣಸಂಕರಕಾರಕ ದೋಷದಿಂದಾಗಿ ಶಾಶ್ವತವಾದ ಜಾತಿಧರ್ಮಗಳೂ ಕುಲಧರ್ಮಗಳೂ ವಿನಾಶವಾಗುವವು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.