ಬಸವಣ್ಣ   
  ವಚನ - 761     
 
ದಾಸನಂತೆ ತವನಿಧಿಯ ಬೇಡುವನಲ್ಲ; ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ; ಅಂಜದಿರು! ಅಂಜದಿರು! ಅವರಂದದವ ನಾನಲ್ಲ! ಎನ್ನ ತಂದೆ, ಕೂಡಲಸಂಗಮದೇವಾ, ಸದ್ ಭಕ್ತಿಯನೆ ಕರುಣಿಸೆನಗೆ.