ಬಸವಣ್ಣ   
  ವಚನ - 766     
 
ಪೂರ್ವಬೀಜ ವಾಯುಪ್ರಾಣಿಯಲ್ಲ, ಲಿಂಗಪ್ರಾಣಿಯಾ ಶರಣನು. ಏಕಗ್ರಾಹಿ, ಭಾವಭೇದವಿಲ್ಲವಾಗಿ ಮನಃಪ್ರವೇಶಿಯಾ ಶರಣನು. ನಿಮ್ಮವ ಪೂಜಿಸಿ ತನುಧರ್ಮವ ಮರೆದು ನಿಮ್ಮ ಪ್ರತಿಬಿಂಬದಂತಿಪ್ಪ, ಕೂಡಲಸಂಗಮದೇವಾ, ನಿಮ್ಮ ಶರಣನು.