ಬಸವಣ್ಣ   
  ವಚನ - 767     
 
ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ: ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ: ಹಸಿವು-ತೃಷೆ-ವಿಷಯಕ್ಕೆ ಬಳಲುವರಯ್ಯಾ! ಹಸಿವೆಯಾಯಿತ್ತೆಂದು ಅರ್ಪಿತವ ಮಾಡಲಿಲ್ಲ; ತೃಷೆಯಾಯಿತ್ತೆಂದು ಮಜ್ಜನಕ್ಕೆರೆಯಲಿಲ್ಲ: ಇದು ಕಾರಣ, ಕೂಡಲಸಂಗನ ಪೂಜಿಸಿ, ಪ್ರಸಾದವ ಹಡೆವರೊಬ್ಬರೂ ಇಲ್ಲ!