ಬಸವಣ್ಣ   
  ವಚನ - 778     
 
ಗುರುಲಿಂಗಜಂಗಮದಿಂದೆ ಪಾದೋದಕ ಪ್ರಸಾದವಾಯಿತ್ತು. ಆ ಭಾವವೇ ಮಹಾಪ್ರಸಾದವಾಗಿ, ಎನಗೆ ಮತ್ತೆ ಬೇರೆ ವ್ರಸಾದವೆಂಬುದಿಲ್ಲ, ಕೂಡಲಸಂಗಮದೇವಾ.