ಬಸವಣ್ಣ   
  ವಚನ - 779     
 
ದಾಸೋಹವೆಂಬ ಸೋಹೆಗೊಂಡು ಹೋಗಿ ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ. ಇಂತೀ ಚತುರ್ವಿಧಸಂಪನ್ನನಾದೆ, ಕಾಣಾ, ಕೂಡಲಸಂಗಮದೇವಾ.