ಬಸವಣ್ಣ   
  ವಚನ - 780     
 
ಸಜ್ಜನ ಶರಣರ ಕಂಡು ಎನ್ನ ಮನ ಉಬ್ಬಿತ್ತು ನೋಡಿರಯ್ಯಾ! ಶ್ರೀಗುರುಪಾದವ ಹಿಡಿದು ಪಾವನವಾದೆನಯ್ಯಾ. ಪಾದೋದಕ ಪ್ರಸಾದದಿಂದ ಭವಗೆಟ್ಟೆನು, ಕೂಡಲಸಂಗಮದೇವಾ.