ಬಸವಣ್ಣ   
  ವಚನ - 783     
 
ಸಯಿಧಾನವ ತಂದು ನೀಡುವೆನಲ್ಲದೆ ಸಂಬಂಧಿ ನಾನಲ್ಲಯ್ಯಾ. ಕರ್ತಂಗೆ ಭೃತ್ಯಾಚಾರವ ಮಾಡಿ, ಒಕ್ಕುದ ಕೊಂಡಿಪ್ಪೆನಯ್ಯಾ. ಭೋಗಾದಿಭೋಗವ ಸಮವಾಗಿ ಭೋಗಿಸಲು ಅಘೋರ ನರಕದಲ್ಲಿಕ್ಕುವ ಕೂಡಲಸಂಗಮದೇವ.