ಬಸವಣ್ಣ   
  ವಚನ - 787     
 
ಮೌನದಲುಂಬುದು ಆಚಾರವಲ್ಲ. ಲಿಂಗಾರ್ಪಿತವ ಮಾಡಿದ ಬಳಿಕ, ತುತ್ತಿಗೊಮ್ಮೆ 'ಶಿವಶರಣೆ'ನ್ನುತ್ತಿರಬೇಕು. ಕರಣವೃತ್ತಿಗಳಡಗುವುವು, ಕೂಡಲಸಂಗನ ನೆನೆಯುತ್ತ ಉಂಡರೆ.