ಬಸವಣ್ಣ   
  ವಚನ - 789     
 
ಆಳಿಕಾರನೆನಗೊಬ್ಬ ಮಗ ಹುಟ್ಟಿದನೆಂದು ಆಳಿಕೆಯ ಕೆಡಲೀಸದೆ ನಡೆಸುವ ನಮ್ಮಯ್ಯ. ಪಂಚಭೂತ ಕಾಯವ ಭವಿಯೆಂದೆನಲೀಯದೆ ಪ್ರಸಾದಕಾಯ ಮಾಡಿ ಸಲಹುವ ನಮ್ಮಯ್ಯ. ಆಳಿ ಸಾವಲ್ಲಿ ಅವಧಾನಿಯಾಗಿರ್ದರೆ ಆಳ್ದನು ನಮ್ಮ ಕೂಡಲಸಂಗಮದೇವ.