ಬಸವಣ್ಣ   
  ವಚನ - 792     
 
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದರೇನಯ್ಯಾ? ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದರೇನಯ್ಯಾ? ಸುಚರಿತ್ರರು ಎಂತಿದ್ದರೇನಯ್ಯಾ? ಕೂಡಲ ಸಂಗನ ಶರಣರು, ರಸದ ವಾರಿಧಿಗಳು. ಎಂತಿರ್ದರೇನಯ್ಯಾ.